ಕೈತಪ್ಪಿದ ಟಿಕೆಟ್, ಕೃಷ್ಣರಾಜ ಕ್ಷೇತ್ರ ಶಾಸಕ ರಾಮದಾಸ್ ಅಸಮಾಧಾನ.

0
124

ಮೈಸೂರು : ಬಿಜೆಪಿ ಟಕೆಟ್ ಕೈತಪ್ಪಿರುವ ಹಿನ್ನೆಲೆ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ 30 ವರ್ಷದಿಂದ ಇದ್ದ ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಸೋಮವಾರ ಸಂಜೆ ತನ್ನ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಬಾರಿ ಕೃಷ್ಣರಾಜ ಕ್ಷೇತ್ರದಿಂದ ಎಸ್.ಎ ರಾಮದಾಸ್ಗೆ ಬದಲಿಗೆ ಶ್ರೀವತ್ಸ ಎಂಬುವವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ರಾಮದಾಸ್ ಸಾಕಷ್ಟು ಬೇಸರಗೊಂಡಿದ್ದಾರೆ. 30 ವರ್ಷದಿಂದ ಇದ್ದ ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ. ಮುಂದೆ ನಾನು ಆ ಮನೆಯಲ್ಲಿಯೇ ಇರಬೇಕಾ ಅಥವಾ ನನ್ನ ದಾರಿ ನಾನು ನೋಡಿಕೊಳ್ಳಬೇಕಾ ಎಂಬುದುನ್ನು ಮಂಗಳವಾರ (ಏಪ್ರಿಲ್ 18) ತಿಳಿಸುತ್ತೇನೆ.

ಬಿಜೆಪಿ ಹಾಲಿ ಶಾಸಕ ಎಸ್ಎ ರಾಮದಾಸ್ ಅವರು ಈ ಬಾರಿ ಚುನಾವಣೆಯ ಟಿಕೆಟ್ ಸಿಗದ ಕಾರಣ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಮುಂದಿನ ನಡೆಯನ್ನು ಶೀಘ್ರದಲ್ಲಿಯೇ ತಿಳಿಸುವುದಾಗಿ ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಭೇಟಿಗೂ ನಿರಾಕರಣೆ:
ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಕೆಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಶಾಸಕ ರಾಮದಾಸ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ರಾಮದಾಸ್ ತಾವು ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಹೇಳಿ ಅವರ ಜತೆ ಮಾತನಾಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಶ್ರೀವತ್ಸ ಹಾಗೂ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡದೇ ಮನೆಯಿಂದ ಹೊರನಡೆದಿದ್ದಾರೆ.

ಬೇಸರ ಆಗುವುದು ಸಹಜ ಎಂದ ಪ್ರತಾಪ್ ಸಿಂಹ:
ರಾಮದಾಸ್ ಭೇಟಿ ನಿರಾಸರಿಸಿದ ನಂತರ ಮಾಧ್ಯಮಗಳಿಗೆ ಮಾತನಾಡಿದ ಸಂಸ ಪ್ರತಾಪ್ ಸಿಂಹ, ಟಿಕೆಟ್ ಘೋಷಣೆ ಬಳಿಕ ಶಾಸಕ ರಾಮದಾಸ್ ಅವರ ಆಶೀರ್ವಾದ ಪಡೆಯಲು ಅವರ ಮನೆಗೆ ಬಂದಿದ್ದೇವೆ. ಟಿಕೆಟ್ ತಪ್ಪಿರುವ ಕಾರಣ ಅವರಿಗೆ ಸಹಜವಾಗಿ ನೋವಾಗಿದೆ. 30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದೆ. ಇಂತಹ ಸಂದರ್ಭದಲ್ಲಿ ನೋವು ಆಗುವುದು ಸಹಜ ಎಂದರು.

ರಾಮದಾಸ್ ತಾಯಿಯನ್ನು ಬಿಟ್ಟು ಕೊಡುವುದಿಲ್ಲ:
ಸದ್ಯ ಬೇಸರದಲ್ಲಿದ್ದೇನೆ. ಮಂಗಳವಾರ (ಏ.18ಕ್ಕೆ) ನಿಮ್ಮನ್ನು ಭೇಟಿ ಮಾಡುತ್ತೇನೆ, ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಪಕ್ಷವನ್ನು ತಾಯಿ ಎಂದು ಭಾವಿಸಿರುವ ಅವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನನ್ನ ಬೆಂಬಲಿಸುವ ಭರವಸೆ ಇದೆ ಎಂದ ಶ್ರೀವತ್ಸ:
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀವತ್ಸ ಅವರು ಮಾತನಾಡಿ, ” 30 ವರ್ಷದಿಂದ ನಾವು ರಾಮದಾಸ್ ಅವರ ಜೊತೆಗೆ ಇದ್ದೇವೆ. ಅವರು ನನ್ನ ವಿರುದ್ಧ ಕೆಲಸ ಮಾಡಲ್ಲ, ನನ್ನನ್ನು ಬೆಂಲಿಸುತ್ತಾರೆ ಎಂಬ ಭರವಸೆ ನನಗೆ ಇದೆ ಎಂದರು.

ಲಿಂಬಾವಳಿ, ರಾಮದಾಸ್ಗೆ ಟಿಕೆಟ್ ಇಲ್ಲ:
ಸೋಮವಾರ ಸಂಜೆ ಬಿಜೆಪಿ 10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪೈಕಿ ಹಾಲಿ ಶಾಸಕರುಗಳಾದ ರಾಮದಾಸ್ ಹಾಗೂ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡಿಲ್ಲ.


ಕನಸಿನಾ ದೇವಿಯಾಗಿ ಚಿತ್ರಗೀತೆ ವಿಕ್ರಮ ಅವರ ಧ್ವನಿಯಲ್ಲಿ

LEAVE A REPLY

Please enter your comment!
Please enter your name here